ನೀರ ಕಪ್ಪೆ, ಮರದ ಕಪ್ಪೆ

ತೋಡುಗಳಿಂದ ಹೊಳೆಗೆ ಹೊಳೆಯಿಂದ ನದಿಗೆ
ಹೋಗುವೆನು.  ಹಲವು ಭೂಖಂಡಗಳ ನದಿಗಳಲ್ಲಿ
ಈಜಾಡುವೆನು.  ಹಲವು ನದಿಗಳ ನೀರು
ಕುಡಿಯುವೆನು.  ಏಳು ಸಮುದ್ರಗಳನ್ನು
ಹೊಗುವೆನು.  ತಿಮಿಂಗಿಲಗಳನ್ನು ನುಂಗುವೆನು.
ನನ್ನ ಮೈಕಾಂತಿಗೆ ನಕ್ಷತ್ರಗಳು
ಅಸೂಯೆಗೊಳ್ಳುವುದಿದೆ.  ಮುಳುಗಿದ ಹಡಗುಗಳಿಂದ
ನಾನೊಂದು ತಂತಿ ವಾದ್ಯವನ್ನು ಮಾಡಿ
ನುಡಿಸುವುದಿದೆ.

ಎಲ್ಲ ಸಾಧನೆಗಳನ್ನೂ ತಿರಸ್ಕರಿಸುತ್ತಲೇ ಬಂದವನು
ನಾನು.  ನೀರಿನಿಂದ ನೆಲಕ್ಕೆ ನೆಲದಿಂದ
ಮರಕ್ಕೆ.  ಏರುವವನಿಗೇತರ ಮಿತಿ?
ತಿರುಗಿ ನೋಡದ ಗತಿಗೆ ಹೊಸ ಹೊಸ
ಕ್ಷಿತಿಜಗಳು ಕಾಣಿಸುತ್ತಲೇ ಇರುವುವು.
ರೆಕ್ಕೆಗಳು ಬರುವುದಿದೆ ನನಗೆ-ದೊಡ್ಡ ದೊಡ್ಡ
ರೆಕ್ಕೆಗಳು.  ಆಕಾಶದಲ್ಲಿ ಹಾರುತ್ತ
ಇಡೀ ಲೋಕವನ್ನೇ ನಾನು ಕತ್ತಲೆಯಲ್ಲಿ
ಕೆಡಹುವುದಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾಹೇಬರು ಎಲ್ಲಿ
Next post ನಿದ್ದೆ

ಸಣ್ಣ ಕತೆ

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

cheap jordans|wholesale air max|wholesale jordans|wholesale jewelry|wholesale jerseys